Monday, August 8, 2011

Dr.Kumar and team did a survey on Lion tailed Macaques of Sirsi and Honnavara region


Dr.Kumar and team did a survey on Lion tailed Macaques of Sirsi and Honnavara region along with the then Dcf Mr.Vijay Mohan Raj, the result of which we discovered the largest population of Lion tails in this region. And further more a proposal was mooted to the Government to make this area into a conservation reserve for the macaques, after 4 years of hard work in the region, now the entire area had been declared a conservation reserve. so the documenry potreys our work in this area before the area became a reserve.

http://www.youtube.com/watch?v=iPa61ECOvp8&feature=share

Tuesday, July 19, 2011

ಸಿಟ್ಟು ನೆತ್ತಿಗೆರಿದ ಕಿರುಬ ಕಡೆಗೂ ಗುಂಡಿಗೆ ಬಲಿ

ಶ್ಚಿಮ ಬಂಗಾಳದ ಡಾರ್ಜಿಲಿಂಗ್ ನ ಹಳ್ಳಿಯೊಂದರಲ್ಲಿ ಚಿರತೆಯೊಂದು ಸ್ಲಂ ಏರಿಯಾಕ್ಕೆ ನುಗ್ಗಿ ದಾಂದಲೆ ನಡೆಸಿತು. ಐದಾರು ಮಂದಿಗೆ ಗಾಯ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿತು. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹಿಡಿಯಲು ಶತ ಪ್ರಯತ್ನ ನಡೆಸಿದರು. ಆದರೆ ಯಶಸ್ವಿಯಾಗಲಿಲ್ಲ. ಕಾರ್ಯಾಕಾರಣೆಯ ಮಧ್ಯೆ ಸಿಬ್ಬಂದಿಯೊಬ್ಬರ ಮೇಲೆ ದಾಳಿ ನಡೆಸಿದಾಗ ದೃತಿಗೆಟ್ಟು ತಾಳ್ಮೆ ಕಳೆದುಕೊಂಡ ಅರಣ್ಯ ಸಿಬ್ಬಂದಿಗಳು ಗುಂಡಿಟ್ಟು ಸಾಯಿಸಿದ್ದಾರೆ. ಈ ಕಾರ್ಯಾಚರಣೆಯ ಒಂದಿಸ್ಟು ಫೋಟೋಗಳು ಇಲ್ಲಿವೆ.
 ಪುಣೆಯ ನಗರ ಪ್ರದೇಶವೊಂದರಲ್ಲಿ (
2008 ಜನವರಿ) ಇದೇ ರೀತಿ ಚಿರತೆಯೊಂದು ದಾಳಿ ನಡೆಸಿತ್ತು. ಕಾರ್ಯಾಚರಣೆ ವೇಳೆ ಮೂವರು ಸಿಬ್ಬಂದಿಗಳೂ ಗಾಯಗೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.







Friday, June 17, 2011

Alexey ಕ್ಯಾಮರಾ ಕಣ್ಣಲ್ಲಿ....

ಪ್ರೀತಿ ಇಲ್ಲದ ಜಾಗವಿಲ್ಲ... ಪೀತಿಯೇ ಎಲ್ಲಾ. ಈ ಛಾಯಾಚಿತ್ರಗಳು ನಿಜಕ್ಕೂ ನಮ್ಮನ್ನು ಅರೆ ಕ್ಷಣ ಮೂಖರನ್ನಾಗಿಸುವುದರಲ್ಲಿ ಅನುಮಾನವಿಲ್ಲ. ಹ್ಯಾಟ್ಸಾಫ್ ಅಲೆಕ್ಸಿ. ಹೌದು, ಈ ಮೂಮೆಂಟ್ಸ್ ಗಳನ್ನು ಸೆರೆ ಹಿಡಿದವರು Alexey Tymoshenko. ಈತನ ಇನ್ನಸ್ಟು ಛಾಯಾಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ ನೋಡಿ http://photographers.com.ua/pictures/user/13198/.







Wednesday, June 15, 2011

'ಆಗಸ್ಥ್ಯ' ದತ್ತು ಪಡೆದ ಧೋನಿ

ಮೈಸೂರು ಮೃಗಾಲಯದಲ್ಲಿರುವ 'ಆಗಸ್ಥ್ಯ' ಹುಲಿಯನ್ನು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ದತ್ತು ಪಡೆದಿದ್ದಾರೆ. ದತ್ತು ಪಡೆದವರ ಸಾಲಿನಲ್ಲಿ ಕರ್ನಾಟಕದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಕೂಡ ಇದ್ದಾರೆ.
Dhoni's quote : " Tiger, our national animal needs  protection. I  am adopting  "Agashtya"to endorse and ecourage our people to  love animals and to stand for the cause of animal rights and conservation.Live and let live." 





Saturday, May 14, 2011

ದಾಖಲೆ ಬರೆದ 'ಹುಲಿ ದಾರಿ'!

ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹಕ್ಕಿಗಳು ಹೇಗೆ ವಲಸೆ ಹೋಗುತ್ತೋ ಹಾಗೇ ಹುಲಿ ಕೂಡ ಆಗಾಗ ಪ್ರಯಾಣ ಬೆಳೆಸುತ್ತೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಖ್ಯಾತ ವನ್ಯಜೀವಿ ತಜ್ಞ ಡಾ. ಉಲ್ಲಾಸ್ ಕಾರಂತರು ಮೊನ್ನೆ ಮೊನ್ನೆಯಷ್ಟೇ ಪತ್ತೆ ಹಚ್ಚಿದ ಮತ್ತೊಂದು ಹುಲಿಯ ದಾಖಲೆಯ ವಲಸೆಯ ಕತೆ ನಿಮಗಾಗಿ...
 ಇದು ಒಂದೆರಡು ಕಿಲೋ ಮೀಟರ್ ಪ್ರಯಾಣವಲ್ಲ. ಬರೋಬ್ಬರಿ 280 ಕಿಲೋ ಮೀಟರ್ ದೂರ ಕ್ರಮಿಸಿದ ಗಂಡು ಹುಲಿರಾಯ ಶಿವಮೊಗ್ಗದ ಶಿಕಾರಿಪುರದಲ್ಲಿ ಗಲಾಟೆ
 ಮಾಡಿದ ಪ್ರಹಸನ. ಈ ಹುಲಿಯ ಜಾಡು ಹಿಡಿದು ಹೊರಟ ಕಾರಂತರು ಮತ್ತು ಅವರ ಟೀಮ್ ಇದು ಬಂಡೀಪುರ ಅಭಯಾರಣ್ಯ ಪ್ರದೇಶ ಗುಂಡ್ರೆಯಲ್ಲಿ ಹುಟ್ಟಿ ಬೆಳೆದ
ಹುಲಿರಾಯ ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.
 ಅದು ಹೇಗೆ ಸಾಧ್ಯ ಎನ್ನುವುದು ನಿಮ್ಮಲ್ಲಿ ಪ್ರಶ್ನೆ ಉದ್ಭವಿಸಬಹುದು. ಹೌದು, ಇವನ್ನೆಲ್ಲಾ ಪತ್ತೆ ಹಚ್ಚಲು ಸಾಧ್ಯ. ಇದಕ್ಕೆ ಈ ಹಿಂದಿನ ಕೆಲವು ದಾಖಲೆಗಳೆಲ್ಲಾ ಅಗತ್ಯ. ಅವನ್ನೆಲ್ಲಾ ತೆಗೆದು ತಾಳೆ ಹಾಕಿ ನೋಡಿದಾಗಪತ್ತೆ ಕಾರ್ಯ ಸಾಧ್ಯ.
 ಇತ್ತೀಚೆಗೆ ಶಿಕಾರಿಪುರದಲ್ಲಿ ಹುಲಿಯೊಂದು ಊರ ಹೊಲಕ್ಕೆ ನುಗ್ಗಿ ಗಲಾಟೆ ಮಾಡಿತ್ತಲ್ಲ. ಆಮೇಲೆ ಆ ಹುರಾಯನನ್ನು ಬಂಧಿಸಲಾಗಿತ್ತು. ಅಲ್ಲಿಂದ ಶುರುವಾಯ್ತು ಇದು ಎಲ್ಲಿಂದ ಬಂತು? ಇದರ ವಯಸ್ಸೆಷ್ಟು? ಹೀಗೆ ಹುಟ್ಟಿಕೊಂಡ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತಾ ಹೊರಟಾಗ ಗೊತ್ತಾಗಿದ್ದು ಇದು ಗುಂಡ್ರೆಯ ಕಾಡಲ್ಲಿ ಹುಟ್ಟಿ ಬೆಳೆದ ಹುಲಿ ಎಂದು.
 ಸಿಡಬ್ಲ್ಯುಎಸ್ ಕಾರ್ಯಕರ್ತರು ಈ ಹಿಂದೆ ಬಂಡೀಪುರ ಕಾಡಿನಲ್ಲಿ ಹಿಡಿದ(ಫೆಬ್ರವರಿ 10ರಂದು) ಹುಲಿರಾಯನ ಕ್ಯಾಮರಾ ಟ್ರ್ಯಾಪ್ಡ್ ಸಂಗ್ರಹ ಛಾಯಾಚಿತ್ರಗಳನ್ನು ಹಾಗೂ ಶಿಕಾರಿಪುರದಲ್ಲಿ ಸೆರೆ ಹಿಡಿದ ಹುಲಿರಾಯನ ಛಾಯಾಚಿತ್ರಗಳನ್ನು ತಾಳೆ ಹಾಕಿ ನೋಡಲಾಯಿತು. ಸಾಕಷ್ಟು ಹೊಂದಾಣಿಕೆ ಇದ್ದುದು ಕಂಡುಬಂತು. ಬಳಿಕ ಮೈ ಮೇಲಿನ ಪಟ್ಟೆಗಳನ್ನು, ವರ್ಣಗಳ ಸಾಮ್ಯತೆಗಳನ್ನು ಆಧರಿಸಿ ಅದೇ ಹುಲಿರಾಯ ಗುಂಡ್ರೆಯಿಂದ ಶಿವಮೊಗ್ಗದ ಶಿಕಾರಿಪುರಕ್ಕೆ ಕ್ರಮಿಸಿದ್ದಾನೆ ಅನ್ನೋ ನಿರ್ಧಾರಕ್ಕೆ ಬರಲಾಗಿದೆ.
 ಅಷ್ಟಕ್ಕೂ ಈ ಹುಲಿರಾಯನ ವಯಸ್ಸು ಮೂರು ವರ್ಷ ಮಾತ್ರ. ಈ ಮಹಾರಾಯನ ಗುಂಡ್ರೆ ಟು ಶಿಕಾರಿಪುರ ಪ್ರಯಾಣ ದಾಖಲೆ ಸೃಷ್ಟಿಸಿದೆ. ಹುಲಿಯೊಂದು ಇಷ್ಟೊಂದು ದೂರ ಕ್ರಮಿಸಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇದು ಅಂದಾಜಿನ ಲೆಕ್ಕಾಚಾರ. ಎನ್ನೆಲ್ಲೆಲ್ಲಿ ಸುತ್ತಾಡಿ ಬಂದಿದೆಯೋ ಗೊತ್ತಿಲ್ಲ. ಒಂದೊಮ್ಮೆ ಈ ಹುಲಿಗೆ ರೇಡಿಯೋ ಟ್ರ್ಯಾಕಿಂಗ್ ಅಳವಡಿಸಿದ್ದರೆ ಇದನ್ನೂ ಪತ್ತೆ ಹಚ್ಚಲು ಸಾಧ್ಯವಿತ್ತು. ಕೇವಲ 15 ತಿಂಗಳುಗಳ ಅಂತರದಲ್ಲಿ ಈ ಹುಲಿ ಗುಂಡ್ರೆ ಟು ಶಿಕಾರಿಪುರಕ್ಕೆ ತನ್ನ ಆವಾಸ ಸ್ಥಾನವನ್ನು ಬದಲಾಯಿಸಿತ್ತು ಅನ್ನೋದು ಗ್ಯಾರಂಟಿ.

Tuesday, April 26, 2011

ಹ್ಯಾಪಿ ಬರ್ತ್ ಡೇ ಜಾನ್


ಹೌದು, ಇಂದು ನಮಗೆಲ್ಲಾ ಸ್ಮರಣೀಯ ದಿನ. ಕಾರಣ ಇಷ್ಟೆ ವಿಶ್ವದ ಖ್ಯಾತ ಪಕ್ಷಿಪ್ರಿಯ, ಚಿತ್ರಕಾರ ಜಾನ್ ಜೇಮ್ಸ್ ಅಡುಬಾನ್ಸ್ ಅವರ 226ನೇ ಬರ್ತ್ ಡೇ. ಪಕ್ಷಿಗಳ ಮೇಲೆ ಅಪಾರ ಪ್ರೀತಿ ಇರಿಸಿಕೊಂಡಿದ್ದ ಈ ಅಸಾಮಾನ್ಯನ ಬಗ್ಗೆ ನಮಗೆ ಇತಿಹಾಸದ ಪುಟಗಳಲ್ಲಿ ಮಾತ್ರ ಮಾಹಿತಿ ಲಭ್ಯ. ನಾನು ಕನ್ನಡಪ್ರಭದಲ್ಲಿ ಪಕ್ಷಿಕಾಶಿ ಅಂಕಣ ಬರೆಯುತ್ತಿದ್ದ ಸಂದರ್ಭದಲ್ಲಿ ಮಾಹಿತಿಗಳಿಗಾಗಿ ಸಾಕಷ್ಟು ಹುಡುಕಾಡುತ್ತಿದ್ದೆ. ಆಗ ಈ ಮೇಧಾವಿಯ ಬಗ್ಗೆ ಒಂದಿಷ್ಟು ಓದಿ ತಿಳಿದುಕೊಳ್ಳಲು ಸಾಧ್ಯವಾಯಿತು.
 ಮತ್ತೆ ಇಂದು ಜಾನ್ ಜೇಮ್ಸ್ ನೆನಪಾದರು. ನನ್ನ ಮೊಬೈಲ್ ಬೆಳಿಗ್ಗೆ ಎದ್ದೇಳುತ್ತಿದ್ದಂತೆ ಜಾನ್ ಅವರನ್ನು ನೆನಪಿಸಿತು. ತಕ್ಷಣ ಎದ್ದು ಮಾಡಿದ್ದು ನೆಟ್ ಆನ್ ಮಾಡಿ ಲಾಗಿನ್ ಆಗಿದ್ದು. ನನ್ನ ಗೆಳೆಯರಿಗೂ ನೆನಪಿಸಿದೆ. ಆದರೆ ತಿರುವನಂತಪುರಂನ ನನ್ನ ಸ್ನೇಹಿತ ಮಣಿವಣ್ಣನ್ ನಿನ್ನೆ ರಾತ್ರಿಯೇ ಒಂದು ಮೇಲ್ ಕಳುಹಿಸಿ, ಅಲರ್ಟ್ ಮಾಡಿದ್ದರು. ನಿನ್ನೆ ರಾತ್ರಿ ನಾನು ಮೇಲ್ ಚೆಕ್ ಮಾಡಿಲ್ಲದ ಕಾರಣ ನನ್ನ ಮೊಬೈಲೇ ನನಗೆ ನೆನಪಿಸಿದ್ದು ಎಂದು ಹೇಳಬೇಕಾಯ್ತು.
 ಇರಲಿ, ಯಾರು ನೆನಪಿಸಿದರೇನಂತೆ...
ಅಷ್ಟಕ್ಕೂ ಇಂದು ಈ ಸಾಧಕನನ್ನು ಸ್ಮರಿಸೋಣ.
ಅವರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
 ಜಾನ್ ಜೇಮ್ಸ್ ಅಡುಬಾನ್ಸ್ 1785 ಏಪ್ರಿಲ್ 26ರಂದು ಸೇಂಟ್ ಡಾಮಿಂಗ್ಯೂ ಅರ್ಥಾ ತ್ ಇಂದಿನ ಹೈಟಿಯ ಫ್ರೆಂಚ್ ಕಾಲೋನಿಯಲ್ಲಿ ಜನಿಸಿದರು. ಪ್ರಾಯಕ್ಕೆ ಬರುವ ವರೆಗೂ ಫ್ರಾನ್ಸ್  ನಲ್ಲೇ ಜೀವನ ಸಾಗಿಸಿ 18ರ ವಯಸ್ಸಿನಲ್ಲಿ ಅಮೇರಿಕದತ್ತ ಹೆಜ್ಜೆ ಹಾಕಿದರು. ಬಾಲ್ಯದಲ್ಲೇ ಇವರನ್ನು ಕಾಡಿದ್ದು ಪಕ್ಷಿಗಳು ಮತ್ತು ಚಿತ್ರಕಲೆ. ತಮ್ಮ ಕಣ್ಣಿಗೆ ಬಿದ್ದ ಪಕ್ಷಿಗಳ ಬಗ್ಗೆ ತೀವ್ರ ಕೌತುಕದಿಂದ ಮಾಹಿತಿ ಸಂಗ್ರಹಿಸುತ್ತ ಆ ಪಕ್ಷಿಗಳ ಚಿತ್ರ ರಚಿಸುತ್ತಿದ್ದರು. ಮುಂದೆ ಅದೇ ಅವರ ಜೀವನ ಸಾಧನೆಗೆ ದಾರಿಯಾಯಿತು.
 ಅಮೇರಿಕಕ್ಕೆ ವಲಸೆ ಬಂದ ಮೇಲೆ ಜಾನ್ ಅವರಿಗೆ ಪಕ್ಷಿಗಳ ಮೇಲೆ ಇನ್ನಷ್ಟು ಆಸಕ್ತಿ ಹುಟ್ಟಿಕೊಳ್ಳುತ್ತೆ. ಬಳಿಕ ಅಮೇರಿಕನ್ ಪಕ್ಷಿ ಸಂಕುಲಗಳ ಅಧ್ಯಯನದಲ್ಲಿ ತೊಡಗಿಸಿಕೊಂಡರು. ತಾನು ಅಧ್ಯಯನ ನಡೆಸುವ ಪ್ರತಿ ಪಕ್ಷಿಯ ಚಿತ್ರಗಳನ್ನು ತಾವೇ ರಚಿಸಿ ಸಂಗ್ರಹಿಸಲಾರಂಭಿಸಿದರು. 1827ರಲ್ಲಿ ಅವರ The Birds of America ಪುಸ್ತಕ ಕೂಡ ಲೋಕಾರ್ಪಣೆಯಾಯಿತು. ಈ ಪುಸ್ತಕದಿಂದಲೇ ಜಾನ್ ಒಬ್ಬ ಅದ್ಭುತ ಪಕ್ಷಿ ತಜ್ಞ ಅನ್ನೋದು ವಿಶ್ವಕ್ಕೆ ಗೊತ್ತಾಗಲು ಕಾರಣವಾಯಿತು. ಆ ನಂತರದ ದಿನಗಳಲ್ಲಿ ಪಕ್ಷಿಗಳ ಕುರಿತು ಅನೇಕ ಪುಸ್ತಕ, ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಪ್ರಾಣಿಗಳ ಮೇಲಿನ ಪ್ರೀತಿ ಕೂಡಾ ಅವ್ರ ಅನೇಕ ಚಿತ್ರಗಳಲ್ಲಿ ಕಾಣಲು ಸಾಧ್ಯ.
 ಜಾನ್ ತಮ್ಮ 65ನೇ ವಯಸ್ಸಿನಲ್ಲಿ (1851 ಜನವರಿ 27ರಂದು) ನಿಧನರಾದರು. ಆಗ ಜಾನ್ ನ್ಯೂಯಾರ್ಕ್ ನಲ್ಲಿದ್ದರು. ಈಗಲೂ  ನ್ಯೂಯಾರ್ಕ್ ನ ಗ್ಯಾಲರಿಗಳಲ್ಲಿ ಜಾನ್ ಆವರ ವರ್ಣ ಚಿತ್ರಗಳನ್ನು ಕಾಣಲು ಸಾಧ್ಯ.




Saturday, March 19, 2011

ಗುಬ್ಬಚ್ಚಿ ಬಗ್ಗೆ ಮನಬಿಚ್ಚಿ....


Kullu, Himachal Pradesh, India
  • ಗುಬ್ಬಚ್ಚಿ ನಗರ ಬಿಟ್ಟು ಓಡಿದವು... ಎಂದು ಗುಬ್ಬಚ್ಚಿದಿನಾಚರಣೆ ಬಂದಾಗಲೆಲ್ಲ ಕತೆ ಹೇಳ್ತೇವೆ....

  • ಮೊಬೈಲ್ ಟವರ್ ಗಳು ಜಾಸ್ತಿ ಆಗ್ತಿರೋ ಕಾರಣ ಗುಬ್ಬಚ್ಚಿ ನಗರ ಬಿಟ್ಟು ಹೋಗ್ತಿವೆ....
 ಗುಬ್ಬಚ್ಚಿಗಳೆಲ್ಲ ನಗರ ಬಿಟ್ಟು ಹೋಗಲು ಕೇವಲ ಮೊಬೈಲ್ ಒಂದೇ ಕಾರಣ ಅಲ್ಲ. ಶೇಕಡಾ 20 ಇದ್ದಿರಬಹುದು ಅಸ್ಟೆ.
ಮೊಬೈಲ್ ಗುಬ್ಬಿಗಳಿಗೊಂದೇ ತೊಂದರೆ ಮಾಡುತ್ತಿವೆಯಾ? ಕಾಗೆ, ಮೈನಾ ಇತ್ಯಾದಿ ಕೆಲ ಪಕ್ಷಿಗಳಿಗೆ ತೊಂದರೆ ಮಾಡುತ್ತಿಲ್ಲವೇ? ಶಿವಾಜಿನಗರ ಸೇರಿದಂತೆ ಬೆಂಗಳೂರಿನ ನೂರಾರು ಕಡೆ ಮಾರಾಟಕ್ಕೆಂದು ಬಂಧಿಸಿಟ್ಟ ತರಾವರಿಯ ಲವ್ ಬರ್ಡ್ಸ್ ಗಳಿಗೆ ಯಾವುದೇ ತೊಂದರೆ ಮಾಡುತ್ತಿಲ್ಲವೇ?
 ಹೀಗೆ ಅನೇಕ ಪ್ರಶ್ನೆಗಳು ನನ್ನನ್ನ ಕಾಡಿದ್ದಿದೆ. ಆದರೆ ನಾನು ತಿಳಿದು ಕೊಂಡಂತೆ ಗುಬ್ಬಚ್ಚಿ
ಗಳು ನಗರವನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲೇ ಇವೆ. ನಿಮ್ಮ ಮನೆ ಬಾಗಿಲಿಗೆ ಬರುತ್ತಿಲ್ಲ ಅಸ್ಟೆ.
 ಕೆಲ ವರ್ಷಗಳ ಹಿಂದೆ ಈ ಗುಬ್ಬಿಗಳಿಗೆ ನಮ್ಮ-ನಿಮ್ಮ ಮನೆಯಲ್ಲಿ ಆಹಾರ ಸಿಗುತ್ತಿದ್ದವು. ಆದರೆ ಇಂದು ಆಹಾರ ಸಿಗುತ್ತಿವೆಯಾ? ಪ್ರಾಮಾಣಿಕವಾಗಿ ನಾವು ಗುಬ್ಬಚ್ಚಿ
ಗೆ ಬೇಕಾದ ಆಹಾರ ನೀಡುತ್ತಿದ್ದೇವಾ?
 ಖಂಡಿತವಾಗಿಯೂ ಇಲ್ಲ ಬಿಡಿ. ಬದಲಾದ ನಮ್ಮ ಜೀವನ ಶೈಲಿ ಈ ಗುಬ್ಬಿಗಳ ಜೀವಕ್ಕೆ ಕಂಟಕ ಪ್ರಾಯವಾಗಿದೆ. ನಮ್ಮ ಮನೆ ಸದಸ್ಯರಂತೆ ವಾಸವಾಗುತ್ತಿದ್ದ ಗುಬ್ಬಿಗಳು ಇಂದಿನ ಸ್ಲ್ಯಾಬ್ ಮನೆಗಳಲ್ಲಿ ಎಲ್ಲಿ ವಾಸಿಸಬೇಕು? ನಾವೇನಾದ್ರು ಅದಕ್ಕೊಂದು ಪ್ರತ್ಯೇಕ ಮನೆ(ಗೂಡು) ಮಾಡಿಕ್ಕೊಟ್ಟಿದ್ದೇವಾ? ಮನೆ ಇರಲಿ ನಾವಿದ್ದ ಮನೆ ಆವರಣಕ್ಕೆ ಕಾಲಿಡಲೇ ಬಿಡುತ್ತಿಲ್ಲ.
 ನಮ್ಮ ಅಮ್ಮನೋ, ಅಜ್ಜಿಯೋ ಮನೆಯಲ್ಲಿ ಅಕ್ಕಿ, ಗೋದಿ, ಜೋಳ, ರಾಗಿಯಲ್ಲಿದ್ದ ಹುಳು, ನೆಲ್ಲು ಆರಿಸಿ ಅಂಗಳಕ್ಕೆ ಎಸೆಯುತ್ತಿದ್ದರು. ಅವನ್ನೆಲ್ಲ ಆರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವು ಈ ಗುಬ್ಬಿಗಳು. ಎಸ್ಟೋ ಮನೆಗಳಲ್ಲಿ ಬೆಳಿಗ್ಗೆ, ಸಾಯಂಕಾಲ ಧಾನ್ಯಗಳನ್ನ ತುಳಸಿ ಕಟ್ಟೆಯ ಮೇಲೆ, ಮನೆ ಎದುರ ಬಾಗಿಲಲ್ಲಿ ಇಡುವ ಪರಿಪಾಟ ಇತ್ತು. ಇಗೆಲ್ಲಿವೆ?
 ಇನ್ನು ಹಳ್ಳಿಗಳಲ್ಲಿ ಇನ್ನೂ ಉಳಿದಿವೆ. ಹುಲ್ಲಿನಿಂದ ಬತ್ತವನ್ನ ಬೇರ್ಪಡಿಸುವ ವೇಳೆ ಸಹಜವಾಗಿಯೇ ಕಾಣಲು ಸಾಧ್ಯವಿದೆ. ನಗರ ಪ್ರದೇಶದ ಮನೆಗಳಲ್ಲಿ ಇಂಥ ಯಾವುದೇ ಸನ್ನಿವೇಶಗಳು ಇಲ್ಲದಿರುವಾಗ ಹೇಗೆ ಗುಬ್ಬಚ್ಚಿ
ಗಳು ಇರಬೇಕು? ಆದರೆ ಎಪಿಎಮ್ ಸಿ ಯಾರ್ಡ್ ಗಳಲ್ಲಿ , ಮಾರುಕಟ್ಟೆ ಪ್ರದೇಶಗಳಲ್ಲಿ, ಕಿರಾಣಿ ಅಂಗಡಿಗಳ ಮುಂಭಾಗ ಈಗಲೂ ಗುಬ್ಬಿಗಳು ಇವೆ. ಪ್ರತಿಯೊಬ್ಬರೂ ಮನೆಗಳಲ್ಲಿ ಕಾಳು-ಕಡಿ ಹಾಕುವ ಆಭ್ಯಾಸ ಬೆಳೆಸಿಕೊಂಡರೆ ಈಗಲೂ ಗುಬ್ಬಚ್ಚಿಗಳು ನಿಮ್ಮ ಮನೆಯಲ್ಲಿ, ಅಥವಾ ನೆರೆಹೊರೆಯ ಕಟ್ಟಡಗಳಲ್ಲಿ ವಾಸವಾಗಿದ್ದು, ಪ್ರತಿದಿನ ನಿಮ್ಮ ಮನೆಗೆ ಭೇಟಿ ಕೊಡುವುದರಲ್ಲಿ ಅನುಮಾನವಿಲ್ಲ.