Friday, March 12, 2010

ಚೋರೆಚಾಣನ ಚೂರಿ ಇರಿತ



ಕೆಲವೊಮ್ಮೆ ಏನೇನೋ ಕಾರಣಕ್ಕಾಗಿ ಒಂದೆಡೆ ಯಿಂದ ಇನ್ನೊಂ ದೆಡೆಗೆ ಸ್ಥಳಾಂತರ ಗೊಳ್ಳಲು ನಮ್ಮ ಮನಸ್ಸುಗಳು ಹೇಗೆ ಕೆಲಸ ಮಾಡುತ್ತವೋ ಹಾಗೆಯೇ ಹಕ್ಕಿಗಳು ಕೆಲವೊಮ್ಮೆ ತನ್ನ ಜಾಗ ಬದಲಾಯಿಸುತ್ತವೆ.
ಇಂಥ ಗುಣವನ್ನು ಸುಲಭವಾಗಿ ಗುರುತಿಸಬಲ್ಲ ಹಕ್ಕಿ ಎಂದರೆ ಈ 'ಚೋರೆಚಾಣ' ಅರ್ಥಾತ್ Kestrel. ಗಿಡುಗ ಜಾತಿಗೆ ಸೇರಿದ ಹಕ್ಕಿ ಇದು. ವಿಚಿತ್ರ ಸ್ವಭಾವದ ಹಕ್ಕಿ ಇದು. ನಮಗೆ ಹೇಗೆ ಒಂದು ಸ್ಥಳದಲ್ಲಿ ಹೊಂದಿಕೊಳ್ಳಲು ಸಾಧ್ಯವಾಗದೇ ಇನ್ನೊಂದು ಸೂಕ್ತ ಸ್ಥಳಕ್ಕಾಗಿ ಹುಡುಕಾಡಿ ಅದನ್ನು ದಕ್ಕಿಸಿಕೊಳ್ಳುತ್ತೇವೋ ಹಾಗೆಯೇ ಈ ಚೋರೆ ಚಾಣ ಕೂಡ ತನ್ನ ಆಹಾರ, ಆವಾಸಕ್ಕಾಗಲಿ ಆಗಾಗ ಸ್ಥಳ ಬದಲಾಯಿಸುತ್ತವೆ. ಇನ್ನೊಂದು ವಿಶೇಷತೆಯನ್ನು ಈ ಹಕ್ಕಿಯಲ್ಲಿ ಕಾಣಲು ಸಾಧ್ಯ. ಹಾರಾಟದಲ್ಲಿ ಈ ಹಕ್ಕಿ ಯುದ್ಧ ವಿಮಾನಗಳು ಇದ್ದಂತೆ. ಹಾರುವಾಗ ಯಾವುದೇ ಕ್ಷಣದಲ್ಲಿ ತನ್ನ ಹಾರಾಟದ ದಿಕ್ಕನ್ನು ಬದಲಾಯಿಸಿಕೊಳ್ಳುತ್ತದೆ. ಅದಕ್ಕೆ ತಕ್ಕುದಾದ ರೆಕ್ಕೆಯ ವಿನ್ಯಾಸ ಇದಕ್ಕಿದೆ. ತನ್ನ ರೆಕ್ಕೆಗಳ ಚಲನೆಯಿಂದಲೇ ಸುಲಭವಾಗಿ ದಿಕ್ಕನ್ನು ಬದಲಿಸಿಕೊಳ್ಳುತ್ತದೆ.
ಈ ಚೋರೆ ಚಾಣ ಹಕ್ಕಿಯನ್ನು ರಾಜ್ಯದ ಬಯಲುಸೀಮೆ ಪ್ರದೇಶಗಳಲ್ಲಿ ಕಾಣಲು ಸಾಧ್ಯ. ದೇಹದ ಬಹುತೇಕ ಭಾಗ ಕಂದು ಬಣ್ಣದಿಂದ ಕೂಡಿರುತ್ತದೆ. ಮೈಮೇಲೆ ಕಪ್ಪು ಚುಕ್ಕೆಗಳನ್ನು ನೋಡಲು ಸಾಧ್ಯ. ಪುಕ್ಕದ ತುದಿಯಲ್ಲಿ ಕಪ್ಪು ಪಟ್ಟಿಗಳಿರುತ್ತವೆ. ಕೊಕ್ಕು ಮತ್ತು ಕಾಲುಗಳು ಇನ್ನುಳಿದ ಗಿಡುಗನಂತೆ ಗಟ್ಟಿ, ಮಾಂಸ ಕಡಿದು ತಿನ್ನಲು ಅನುಕೂಲವಾಗುವಂತೆ ಇವೆ. ಕತ್ತನ್ನು ಕ್ಷಣ ಕ್ಷಣಕ್ಕೆ ಅತ್ತಿತ್ತ ಹೊರಳಿಸುತ್ತಲೇ ಇರುತ್ತದೆ. ಗಾತ್ರದಲ್ಲಿ ಹೆಚ್ಚು ಕಡಿಮೆ ಚೋರೆ ಹಕ್ಕಿಯಷ್ಟೇ ಇರುತ್ತದೆ.
ಈ ಹಕ್ಕಿಯನ್ನು ಭಾರತ, ಬಾಂಗ್ಲ, ಲಂಕಾ, ಪಾಕಿಸ್ತಾನಗಳಲ್ಲಿ ಕಾಣಲು ಸಾಧ್ಯ. ಸಂತಾನೋತ್ಪತ್ತಿಯ ವೇಳೆ ತಂಪು ಹವಾಮಾನ ಪ್ರದೇಶಗಳಿಗೆ ಹೋಗಿ ಏಪ್ರಿಲ್-ಜುಲೈ ತಿಂಗಳಾವಧಿಯಲ್ಲಿ 3 -4 ಮೊಟ್ಟೆಯಿಟ್ಟು ಮರಿ ಮಾಡುತ್ತದೆ.
ಚಿತ್ರ: ಅಂತರ್ಜಾಲ

Thursday, February 25, 2010

ವಿಚಿತ್ರ ಸೋಮಾರಿ ಗದ್ದೆ ಮಿಂಚುಳ್ಳಿ


ದ್ದೆ ಭಾಗದಲ್ಲಿರುವ ಎಲೆಗಳಿಲ್ಲದ ಮರಗಳ ಕೊಂಬೆ, ಟೆಲಿಫೋನ್ ಅಥವಾ ವಿದ್ಯುತ್ ತಂತಿಗಳೇ ಈ ಹಕ್ಕಿಯ ಸೋಮಾರಿ ಕಟ್ಟೆ. ಸೋಮಾರಿಗಳಲ್ಲೂ ವಿಚಿತ್ರ ಸೋಮಾರಿ. ಶಿಕಾರಿ ಕಣ್ಣಿಗೆ ಬಿದ್ದ ಬಳಿಕ ಅದೇಸ್ಟೇ ಕಸ್ಟವಾದರೂ ಸರಿ. ತನ್ನ ಬಾಯಿಗೆ ಬೀಳಲೇಬೇಕು. ಭಕ್ಷಿಸಲೇಬೇಕು. ಬೇಟೆ ಸಿಗುವ ತನಕ ತಾನು ಕುಳಿತಲ್ಲಿಂದ ಒಂದಿಂಚೂ ಅಲ್ಲಾಡದ ಸೋಮಾರಿ!
ಇಂಥ ವಿಶೇಷತೆಯ ಹಕ್ಕಿ ಈ 'ಗದ್ದೆ ಮಿಂಚುಳ್ಳಿ' 'ಬೆಳ್ಳೆದೆ ಮಿಂಚುಳ್ಳಿ' (Whait brested Kingfisher ).
ಗುಬ್ಬಚ್ಚಿಗಿಂತ ಸ್ವಲ್ಪ ದೊಡ್ಡದಾಗಿರುವ ಗದ್ದೆ ಮಿಂಚುಳ್ಳಿ ಕರೆ, ಗದ್ದೆ ಭಾಗದಲ್ಲೇ ಜಾಸ್ತಿಯಾಗಿ ಕಾಣಸಿಗುತ್ತದೆ. ಕರಾವಳಿಯಲ್ಲಿ ಈ ಹಕ್ಕಿಗಳನ್ನು ಜಾಸ್ತಿಯಾಗಿ ಕಾಣಬಹುದು. ಆಹಾರಕ್ಕೆ ಇನ್ನುಳಿದ ಮಿಂಚುಳ್ಳಿಗಳು ಪಡುವಸ್ಟು ಶ್ರಮ ಈ ಹಕ್ಕಿಗಿಲ್ಲ. ತೀರಾ ಕಷ್ಟ ಎಂದಾಗ ಕುಳಿತಲ್ಲಿಂದ ಎದ್ದೇಳುವುದಿಲ್ಲ. ಮೀನು, ಕಪ್ಪೆಯೇ ಆಗಬೇಕು ಎಂದು ಕಾಯುವುದೂ ಇಲ್ಲ. ಕೀಟಗಳು ಕಣ್ಣೆದುರು ಬಂದರೆ ಅದನ್ನೇ ಭಕ್ಷಿಸಿ ತೃಪ್ತಿಪಡುತ್ತದೆ.
ನೀರ ಸನಿಹದಲ್ಲಿ ನೆಲಕ್ಕೆ ಹತ್ತಿರ ಇರುವಷ್ಟು ಎತ್ತರದಲ್ಲಿ ಗೂಡು ಮಾಡಿಕೊಂಡಿರುತ್ತದೆ. ಸಾಮಾನ್ಯವಾಗಿ ಮಾರ್ಚ್ ನಿಂದ ಜುಲೈ ವೇಳೆಯಲ್ಲಿ ಗೂಡು ಕಟ್ಟಿಕೊಂಡು 4 -6 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ.
ಎದೆ ಭಾಗದಲ್ಲಿ ಬೆಳ್ಳಗಿನ ಮಚ್ಚೆ, ರೆಕ್ಕೆಗಳ ಮೇಲಿನ ನೀಲಿ ಆಕರ್ಷಣೀಯ. ದೇಹದ ಇನ್ನುಳಿದ ಭಾಗ ಕಂದು ಬಣ್ಣದಿಂದ ಇರುತ್ತದೆ. ಗದ್ದೆ ಮಿಂಚುಳ್ಳಿಯನ್ನು ಪಾಕಿಸ್ತಾನ, ಬಾಂಗ್ಲಾ, ಶ್ರೀಲಂಕಾಗಳಲ್ಲಿ ಜಾಸ್ತಿಯಾಗಿ ಅಲೆದಾಡಿಕೊಂಡಿರುತ್ತದೆ.
ಚಿತ್ರ: ಅಂತರ್ಜಾಲ

Monday, February 22, 2010

ಕುಟುಕಿಗಿಂತ ಗುಟುಕೇ ಇಸ್ಟ!



ದೇನೋ ಕಳೆದು ಕೊಂಡ ವರಂತೆ ಇರುತ್ತದೆ. ಯಾವತ್ತೂ ಚಿಂತಾ ಕ್ರಾಂತ. ಎಲ್ಲಿಲ್ಲದ ಹುಮ್ಮಸ್ಸು ಬಂತೆಂದರೆ ಮರ ಸುತ್ತುವ ಹವ್ಯಾಸ ಇದರದು. ಅತ್ತಿತ್ತ ಸಣ್ಣಪುಟ್ಟ ಸದ್ದಾದರೂ ಕಕ್ಕಾಬಿಕ್ಕಿಯಾಗಿ ಚಡಪಡಿಸುತ್ತದೆ.
ತನ್ನದೇ ಜಾತಿಗೆ ಸೇರಿದ ಇನ್ನೊಂದು ಹಕ್ಕಿ ವಾಸ ಮಾಡಿ ಬಿಟ್ಟ ಪೊಟರೆಯನ್ನೇ ಹುಡುಕಿಕೊಂಡು ತನ್ನ ಮನೆ ಮಾಡಿಕೊಳ್ಳತ್ತೆ. ಈ 'ಹಸಿರು ಮರಕುಟುಕ' (Little green Woodpecker ).
ಹಾಗಂತ ಈ ಹಕ್ಕಿಗೆ ಪೊಟರೆ ಕೊರೆದುಕೊಳ್ಳಲು ಬಾರದು ಎಂದೇನಿಲ್ಲ. ಎಲ್ಲ ಹಕ್ಕಿಗಳನ್ನಸ್ಟೇ ಮರ ಕೊರೆಯುತ್ತದೆ. ಮರಗಳಲ್ಲಿ ಇರುವ ಕೀಟ, ಗೆದ್ದಲು ಹುಳು ಹಾಗೂ ಆಲ, ಮತ್ತಿ ಹಣ್ಣುಗಳೇ ಈ ಹಕ್ಕಿಗೆ ಆಹಾರ.
ನೋಡಲು ಗೊರವಂಕ ಹಕ್ಕಿಗಿಂತ ಸ್ವಲ್ಪ ಚಿಕ್ಕದು. ಇದರ ರೆಕ್ಕೆಗಳು ಹಸಿರಾಗಿರುತ್ತವೆ. ಎದೆ ಮತ್ತು ಹೊಟ್ಟೆ ಭಾಗ ಹಳದಿ ಮಿಶ್ರಿತ ಬಿಳಿ ಬಣ್ಣದಿಂದ ಕೂಡಿರುತ್ತವೆ. ಕೊಕ್ಕು ಕೂಡ ಹಸಿರು ಮಿಶ್ರಿತ ಬೂದು ಬಣ್ಣದಿಂದ ಇರುತ್ತದೆ. ಗೆದ್ದಲು ಹುಳುಗಳನ್ನು ಹಿಡಿದು ತಿನ್ನುವ ವೈಖರಿ ಆಕರ್ಷಣಿಯ.
ಭಾರತ ಸೇರಿ ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಈ ಹಕ್ಕಿಗಳನ್ನು ನೋಡಲು ಸಾಧ್ಯ. ಜನವರಿ ವೇಳೆಗೆಲ್ಲಾ ಸ್ವಲ್ಪ ತೇವಭರಿತ ಹವಾಮಾನ ಇರುವ ಜಾಗಕ್ಕೆ ವಲಸೆ ಹೋಗಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತದೆ. ಜೂನ್ ವೇಳೆಗೆಲ್ಲ ನಾಲ್ಕಾರು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತದೆ. ಗೆದ್ದಲು, ದುಂಬಿ ಈ ಹಕ್ಕಿಯ ಪ್ರಮುಖ ಆಹಾರ.
ಪ್ರಾದೇಶಿಕವಾಗಿ ಈ ಹಕ್ಕಿಗೆ ಪಾಚಿ ಮರಕುಟುಕ, ಸಣ್ಣ ಮರಕುಟುಕ, ಹಸಿರು ಕುಟುಕ ಎಂದೆಲ್ಲ ಕರೆಯುತ್ತಾರೆ.
ಚಿತ್ರ: ಅಂತರ್ಜಾಲ

Friday, January 29, 2010

ಟೀಂ ಇಂಡಿಯಾಕ್ಕೆ ಮತ್ತೊಬ್ಬ ಕನ್ನಡಿಗ






Best of Luck ಮಿಥುನ್...
ಈಗ ನಿಮ್ಮ ನಿಜವಾದ ಕ್ರಿಕೆಟ್ ಹೋರಾಟ ಆರಂಭಗೊಂಡಿದೆ. ಇಷ್ಟು ದಿನದ ನಿಮ್ಮ ಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ. ಈಗ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡು ಕನ್ನಡನಾಡಿಗು, ದೇಶಕ್ಕೂ ಕೀರ್ತಿ ತನ್ನಿ. ನಿಮ್ಮಲ್ಲಿ ಆ ಸಾಮರ್ಥ್ಯ ಇದೆ. Once Again Best of Luck.
ಇದೇ ಮೊದಲ ಬಾರಿ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದು ಕೊಂಡಿರುವ ಬೆಂಗಳೂರಿನ ಅಭಿಮನ್ಯು ಮಿಥುನ್ ಅವರಿಗೆ ಸಹಸ್ರಾರು ಕ್ರಿಕೆಟ್ ಅಭಿಮಾನಿಗಳ ಶುಭ ಸಂದೇಶ ಇದು. 2009ರ ರಣಜಿ ಋತುವಿನಲ್ಲಿ ಕರ್ನಾಟಕ ತಂಡದಲ್ಲಿ ಇದೇ ಮೊದಲ ಬಾರಿಗೆ ಆಡಿ ಶಹಬ್ಬಾಸ್ ಎನಿಸಿ ಕೊಂಡಿರುವ ಮಿಥುನ್ ಅತಿ ಹೆಚ್ಚು ವಿಕೆಟ್ ಪಡೆದುಕೊಳ್ಳುವ ಮೂಲಕ ಕ್ರಿಕೆಟ್ ವೃತ್ತಿ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಈ ಮೊದಲೇ ಕ್ರಿಕೆಟ್ ಉಸಿರಾಗಿಸಿ ಕೊಂಡಿದ್ದರೂ ಅವರ ನಿಜವಾದ ವೃತ್ತಿಜೀವನ ಈಗ ಆರಂಭಗೊಂಡಿದೆ. ಕಾರಣ ದಕ್ಷಿಣಆಫ್ರಿಕ ವಿರುದ್ದದ ಟೆಸ್ಟ್ ಸರಣಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ರಣಜಿ ಟೂರ್ನಿ ಆಡಿರುವ ಮೊದಲ ಪಂದ್ಯದಲ್ಲೇ 47 ವಿಕೆಟ್ ಪಡೆದು, ರಾಷ್ಟ್ರೀಯ ಆಯ್ಕೆ ಮಂಡಳಿಯ ಗಮನ ಸೆಳೆಯುವುದರಲ್ಲೂ ಯಶಸ್ವಿಯಾಗಿದ್ದಾರೆ. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಸಮಿತಿ 20 ರ ಹರೆಯದ ಮಿಥುನ್ ಅವರಿಗೆ ಈಗ ಅವಕಾಶ ಕಲ್ಪಿಸಿದೆ.
11 ವರ್ಷಗಳ ಬಳಿಕ:
ಮಿಥುನ್ ಹೀಗೊಂದು ದಾಖಲೆ ಬರೆದಿದ್ದಾರೆ. 1999 ರ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದುಕೊಂಡ ಕನ್ನಡಿಗ ಎನಿಸಿಕೊಂಡಿದ್ದಾರೆ. 1999 ರಲ್ಲಿ ವಿಜಯ್ ಭಾರದ್ವಾಜ್ ಟೆಸ್ಟ್ ತಂಡದಲ್ಲಿ ಸ್ಥಾನ ಪದೆದುಕೊಂಡಿದ್ದರು. ಭಾರದ್ವಾಜ್ ನಂತರ ರಾಬಿನ್ ಉತ್ತಪ್ಪ ಸ್ಥಾನ ಪಡೆದಿದ್ದರು. ಆದರೆ ಉತ್ತಪ್ಪ ಏಕದಿನ ತಂಡವನ್ನು ಮಾತ್ರ ಪ್ರತಿನಿಧಿಸಿದ್ದಾರೆ.
1990ರಲ್ಲಿ ಅನಿಲ್ ಕುಂಬ್ಳೆ, 1996ರಲ್ಲಿ ರಾಹುಲ್ ದ್ರಾವಿಡ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಸುನಿಲ್ ಜೋಷಿ ಕೂಡ 1996ರಲ್ಲೇ ಟೆಸ್ಟ್ ಆಡಿದ ಕರ್ನಾಟಕದ ಆಟಗಾರ.
ಮನೆ ದಾಸರಹಳ್ಳಿ:
ಮಿಥುನ್ ಮನೆ ಇರುವುದು ಬೆಂಗಳೂರಿನ ಪೀಣ್ಯ ದಾಸರಹಳ್ಳಿ. ಅಭಿಮನ್ಯು ಮತ್ತು ಕವಿತಾ ಅವರ ಹೆಮ್ಮೆಯ ಪುತ್ರ ಮಿಥುನ್. ಚಿತ್ರಾ ಮಿಥುನ್ ಅವರ ಸೋದರಿ. ಚಿತ್ರಾ ಎಂಜಿನಿಯರಿಂಗ್ ವಿದ್ಯಾರ್ಥಿ. ತಂದೆ ಅಭಿಮನ್ಯು ಜಿಮ್ ಮಾಸ್ಟರ್. ಮಿಥುನ್ ತಮ್ಮ ತಂದೆ ಅಭಿಮನ್ಯು ಅವರ ಸ್ವಂತ ಜಿಮ್ ನಲ್ಲೆ ಫಿಟ್ನೆಸ್ ಅಭ್ಯಾಸ ನಡೆಸುತ್ತಾರೆ. ಅಭಿಮನ್ಯು ಶೇಷಾದ್ರಿಪುರಂ ಕಾಲೇಜ್ ವಿದ್ಯಾರ್ಥಿ. ಪಿಯುಸಿ ಮುಗಿಸಿದ್ದಾರೆ. ಮಿಥುನ್ ಕ್ರಿಕೆಟ್ ಕ್ರೀಡೆಯಲ್ಲಿ ಎಷ್ಟು ಟಾಲೆಂಟ್ ಆಗಿದ್ದಾರೋ ಹಾಗೇ ಓದಿನಲ್ಲೂ ಅಸ್ಟೇ ಟಾಲೆಂಟ್. ಶೇ. 68 ಅಂಕಗಳಿಸಿದ್ದಾರೆ.
ದೊಡ್ಡ ಗಣೇಶ್ ಫುಲ್ ಖುಷ್:
ಮಿಥುನ್ ಅವರಿಗೆ ಮಾರ್ಗ ದರ್ಶನ ಮಾಡುತ್ತಿರುವ ದೊಡ್ಡ ಗಣೇಶ್ ಈಗ ಫುಲ್ ಖುಷ್ ಆಗಿದ್ದಾರೆ. ಮಿಥುನ್ ಅವರಲ್ಲಿ ಒಬ್ಬ ಉತ್ತಮ ವೇಗಿ ಇದ್ದಾನೆ. ಅವನನ್ನು ಇನ್ನಸ್ಟು ಬೆಳೆಸುವ ಅಗತ್ಯ ಇದೆ ಎನ್ನುತ್ತಾರೆ.
ನಿಜಕ್ಕೂ ಗಣೇಶ್ ಅವರ ಆಸೆ ನೆರವೀರಬೇಕಿದೆ. ಮಿಥುನ್ ಇನ್ನೊಬ್ಬ ಕರ್ನಾಟಕದ 'ಶ್ರೀನಾಥ್ ' ಆಗಿ ಹೊರ ಹೊಮ್ಮಬೇಕಿದೆ. ಇದಕ್ಕೆ ಜಾವಗಲ್ ಶ್ರೀನಾಥ್ ಅವರ ಸಲಹೆಗಳ ಅಗತ್ಯ ತುಂಬಾ ಇದೆ. ಹಾಗೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡ ಬೆನ್ನೆಲುಬಾಗಿ ನಿಲ್ಲಬೇಕಿದೆ.
ಪಾದಾರ್ಪಣೆ:
ಮಿಥುನ್ ಫೆಬ್ರವರಿ 6 ರಂದು ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿದ್ದಾರೆ. ದಕ್ಷಿಣಆಫ್ರಿಕ ವಿರುದ್ಧ ಆಡಲಿದ್ದಾರೆ. ಭಾರತ ತಂಡ ದಕ್ಷಿಣಆಫ್ರಿಕ ವಿರುದ್ಧ ಎರಡು ಟೆಸ್ಟ್ ಪಂದ್ಯ ಆಡಲಿದೆ.
ಮಿಥುನ್ ಅಂಕಿ ಅಂಶ:
ಮಿಥುನ್ ಅವರ ಈವರೆಗಿನ ಕ್ರಿಕೆಟ್ ಸಾಧನೆಯ ನೋಟ ಇಲ್ಲಿದೆ.
http://www.cricinfo.com/ci/content/player/310958.ಹ್ತ್ಮ್ಲ್

Tuesday, December 29, 2009

ಸಾಹಸ ಸಿಂಹ ವಿಷ್ಣುವರ್ಧನ್ ವಿಧಿವಶ

ಸಾಹಸ ಸಿಂಹ ವಿಷ್ಣು ವರ್ಧನ್ ವಿಧಿವಶ ರಾಗಿದ್ದಾರೆ. ಮೈಸೂರಿಗೆ ವಿಶ್ರಾಂತಿ ಗಾಗಿ ಹೋದ ಸಂದರ್ಭ ದಲ್ಲಿ ಹೃದಯಾ ಘಾತಕ್ಕೆ ಒಳಗಾಗಿ ದ್ದಾರೆ. ಕನ್ನಡ ಚಿತ್ರರಂಗ ದಲ್ಲಿ ಸಾಕಷ್ಟು ಹೆಸರು ಮಾಡಿರುವ ವಿಷ್ಣುವರ್ಧನ್ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟರಾಗಿದ್ದರು. ಗಾನ ಗಾರುಡಿಗ ಸಿ. ಅಶ್ವತ್ಥ್ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಈಗ ವಿಷ್ಣುವರ್ಧನ್ ಅವರನ್ನೂ ಕಳೆದುಕೊಂಡಿದ್ದೇವೆ. ಭುದವಾರ ಬೆಳಗಿನ ಜಾವ ಎರಡುವರೆ ಹೊತ್ತಿಗೆ ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಹೃದಯ ನೋವಿನಿಂದ ಬಳಲುತ್ತಿದ್ದರು.






Wednesday, December 23, 2009

ಗಾಬರಿ ದೇವಿ



ಕಾಡು ಸುತ್ತಿದ ಮಂದಿಗೆ ಈ ಹಕ್ಕಿ ಚಿರಪರಿಚಿತ.
ನಿವೆಸ್ಟೇ ದೈರ್ಯವಂತ ರಾಗಿದ್ದರೂ ಒಮ್ಮೆಯಾದರೂ ನಿಮ್ಮನ್ನು ಗಾಬರಿಗೊಳಿಸದೆ ಇರದು. ಕಾರಣ ಇಸ್ಟೇ, ಗಾಬರಿ ಬೀಳಿಸುವ ಈ ಹಕ್ಕಿ ಕೂಡ ಗಾಬರಿ ಬೀಳುವ ಸ್ವಭಾವದ್ದೆ. ಬಹುತೇಕ ಹಕ್ಕಿಗಳಿಗಿಂತ ಈ ಹಕ್ಕಿಗೆ ಗಾಬರಿ ಬೀಳುವ ಸ್ವಭಾವ ಜಾಸ್ತಿ. ತನ್ನ ಅಕ್ಕಪಕ್ಕ ಬೀಸುವ ಗಾಳಿಗೆ ತರಗಲೆ ಅಲ್ಲಾಡಿದ ಸಪ್ಪಳವಾದರೂ ಕೆಲ ಕ್ಷಣದಲ್ಲೇ ಕಿ.ಮೀ. ದೂರದಲ್ಲಿರುವ ಹಕ್ಕಿ ಇದು.
ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನೋಡ ಸಿಗುವ ಈ ಹಕ್ಕಿ 'ಬುರ್ಲಿ' ಅರ್ಥಾತ್ Jungle Bush Quail.
ಬುರ್ಲಿಗೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ. ಪೊದೆ ಹಕ್ಕಿ, ನೆಲ ಕೆದರೋ ಹಕ್ಕಿ ಎಂದೂ ಕರೆಯುತ್ತಾರೆ. ಬಹಳ ಸೂಕ್ಷ್ಮಜೀವಿಗಳಲ್ಲಿ ಇದೂ ಒಂದು. ಸೂಕ್ಷ್ಮಜೀವಿ ಎನಿಸಿಕೊಂಡಿದ್ದು ಅದರ ಗ್ರಹಣ ಶಕ್ತಿಯಿಂದ. ತಾನಿದ್ದ ಪೊದೆಯ ಸುತ್ತಮುತ್ತ ಸಣ್ಣ ಸದ್ದಾದರೂ ಥಟ್ಟಂತ ಜಾಗೃತ ಸ್ಥಿತಿಗೆ ಬಂದು ಬಿಡುತ್ತದೆ. ಸ್ವಲ್ಪ ಅಪಾಯ ಕಾದಿದೆ ಎಂದು ತಿಳಿದರಂತೂ ಬುರ್ ಎಂದು ಹಾರಿ ಜಾಗ ಖಾಲಿ ಮಾಡಿಬಿಡುತ್ತದೆ. ಬುರ್ಲಿ ಹಕ್ಕಿ ಒಂಟಿಯಾಗಿರುವುದು ವಿರಳ. ಒಂದು ಗುಂಪಿನಲ್ಲಿ ಕನಿಷ್ಠ 3 ರಿಂದ 4 ಹಕ್ಕಿಗಳಾದರೂ ಇರುತ್ತದೆ. ಕಲ್ಲು ಹಕ್ಕಿಗಳಂತೆ ನೆಲದ ಮೇಲೆ ಗೂಡು ಮಾಡಿ ಕೊಳ್ಳುತ್ತದೆ. ಸುತ್ತಲೂ ಹುಲ್ಲುಗಳನ್ನು ತಂದು ಹಾಕಿಕೊಳ್ಳುತ್ತದೆ. ಈ ಹಕ್ಕಿಯ ದೇಹದ ಕೆಳಭಾಗದ ಪಟ್ಟಿಗಳು ಆಕರ್ಷಕ.
ಸಾಮಾನ್ಯವಾಗಿ ಸಂತಾನೋತ್ಪತ್ತಿಯ ವೇಳೆಯಲ್ಲೇ ಗೂಡು ಕಟ್ಟಿಕೊಳ್ಳುವ ಈ ಹಕ್ಕಿ ಆಗಸ್ಟ್-ಮೇ ವೇಳೆಯಲ್ಲಿ 3-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಈ ವೇಳೆ ವ್ಹೀ ವ್ಹೀ ವ್ಹೀ ಎಂದು ಕೂಗುತ್ತಲೇ ಇರುತ್ತದೆ. ಕಲ್ಲಿನ ಬಣ್ಣವನ್ನೇ ಹೋಲುವ ಈ ಹಕ್ಕಿಯ ದೇಹದ ಮೇಲೆ ಕಂದು ಚುಕ್ಕಿಗಳಿರುತ್ತದೆ. ಬಂಡೆಗಳಿರುವ ಪ್ರದೇಶ, ಕುರುಚಲು ಪ್ರದೇಶ, ಪರ್ಣಪಾತಿ ಕಾಡುಗಳಲ್ಲಿ ಜಾಸ್ತಿ. ಮಣ್ಣಿನಲ್ಲಿರುವ ಬೇಳೆ-ಕಾಳುಗಳು ಮತ್ತು ಕೀಟಗಳೇ ಈ ಹಕ್ಕಿಯ ಆಹಾರ.
ಚಿತ್ರ: ಅಂತರ್ಜಾಲ

Sunday, December 13, 2009

ಸತ್ಯನ್ ಅಸ್ತಂಗತ




ತ್ರಿಕಾ ರಂಗದಲ್ಲಿ ಸಾಕಸ್ಟು ಜನಪ್ರಿಯರಾಗಿರುವ ಟಿ.ಎಸ್. ಸತ್ಯನ್ ಈಗ ನೆನಪು ಮಾತ್ರ. ಭಾನುವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವಯಸ್ಸಾಗಿತ್ತು. ಪತ್ರಿಕಾ ರಂಗ ಕಂಡ ವಿಬಿನ್ನ ಫೋಟೋ ಜರ್ನಲಿಸ್ಟ್. ಕಳೆದ ಮೂರ್ನಾಲ್ಕು ದಶಮಾನಗಳ ಹಿಂದೆ ಪತ್ರಿಕಾರಂಗದಲ್ಲಿ ತಮ್ಮ ಅದ್ಭುತ ಛಾಯಾಚಿತ್ರಗಳಿಂದ ವಿಶ್ವದ ಗಮನವನ್ನೇ ಸೆಳೆದವರಲ್ಲಿ ಸತ್ಯನ್ ಕೂಡ ಒಬ್ಬರು. ಮೈಸೂರಿನವರೇ ಆದ ಸತ್ಯನ್ ನಿಜಕ್ಕೂ ಈಗ ನನ್ನ ಕಣ್ಣ ಮುಂದೆ ಬರುತ್ತಿದ್ದಾರೆ.

ಸಾಕಶ್ತು ವರ್ಷಗಳ ಹಿಂದಿನ ಗಟನೆಯಲ್ಲ. ೮ ವರ್ಷಗಳ ಹಿಂದೆ ನಾನು ಮೈಸೂರಿನ ಶ್ರೀ ಕಲಾನಿಕೇತನ ಕಲಾ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಓದುತ್ತಿದ್ದ ವೇಳೆಯಲ್ಲಿ ಛಾಯಾಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೆವು. ಆಗ ಸತ್ಯನ್ ಸೇರಿದಂತೆ ಮೈಸೂರಿನ ಅನೇಕ ಕ್ಯಾತ ಛಾಯಾಚಿತ್ರಕಾರರು ಟಿಪ್ಸ್ ನೀಡಿದ್ದರು. ಅಂದು ಸತ್ಯನ್ ನಮಗೆ ಛಾಯಾಚಿತ್ರದಲ್ಲಿ ಬೆಳಕಿನ ಮಹತ್ವದ ಬಗ್ಗೆ ವಿವರಿಸಿದ್ದರು. ಆ ಬಳಿಕ ಅವರ ಛಾಯಾಚಿತ್ರಗಳನ್ನು ನೋಡಿ ಆನಂದಿಸಿದ್ದೆ. ಅವರ ಛಾಯಾಚಿತ್ರಗಳಲ್ಲಿ ವಿಶೇಷವಾಗಿ ಬೆಳಕು ಮತ್ತು ಯಥಾದೃಷ್ಟರೂಪಣ, ಪರಿದೃಶ್ಯ (perspective) ಗೆ ಮಹತ್ವ ನಿಡುತ್ತಿದುದನ್ನು ಕಾಣಬಹುದು. ಅಸ್ಟೇ ಅಲ್ಲ, ವಿಷಯಾಧಾರಿತ ಚಿತ್ರಗಳನ್ನೂ ಕ್ರಿಯಾಶೀಲವಾಗಿ ಸೆರೆ ಹಿಡಿದಿರುವುದನ್ನು ನೋಡಲು ಸಾಧ್ಯ.

ಟಿ. ಎಸ್. ಸತ್ಯನ್ ಅವರ ‘ಕಾಲಕ್ಕೆ ಕನ್ನಡಿ’ ಪುಸ್ತಕದಲ್ಲಿ ಇಂಥ ಕೆಲವೊಂದು ಮಹತ್ವದ ವಿಚಾರಗಳಿವೆ. ಪತ್ರಿಕೋದ್ಯಮದ ಅಪರೂಪದ ಅನುಭವಗಳನ್ನು ಬರೆದಿದ್ದಾರೆ, ಅನೇಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಪ್ರಿಸಂ ಬುಕ್ಸ್ ಈ ಪುಸ್ತಕ ಪ್ರಕಟಿಸಿದೆ. ಇದು ಕನ್ನಡ, ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮುದ್ರಣಗೊಂಡಿದೆ. ಸತ್ಯನ್ ಅವರ ಅನೇಕ ಛಾಯಾಚಿತ್ರಗಳು ಇಂಡಿಯಾ ಟುಡೇ, ನ್ಯೂಸ್ ವೀಕ್, ಔಟ್ ಲುಕ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸತ್ಯನ್ ಅವರಿಗೆ ಅಂತಾರಾಷ್ಟ್ರೀಯ ಪ್ರಚಾರ ಗಿಟ್ಟಿಸಿ ಕೊಟ್ಟವರಲ್ಲಿ ಯುನಿಸೆಫ್ ಪಾತ್ರ ಮಹತ್ವದ್ದು. 1979 ರಲ್ಲಿ ನ್ಯೂಯಾರ್ಕ್ ನಲ್ಲಿ ಸತ್ಯನ್ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿತು. ನಂತರ ಅವರು ಅನೇಕ ರೀತಿಯಿಂದ ಬೆಳೆಯಲೂ ಕಾರಣವಾಯಿತು.

ಟಿ. ಎಸ್. ಸತ್ಯನ್ ಜನಿಸಿದ್ದು 1923 ರಲ್ಲಿ. ಸತ್ಯನ್ ಗೆ ೧೯೭೭ ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಸಂದಿದೆ.