Tuesday, December 29, 2009

ಸಾಹಸ ಸಿಂಹ ವಿಷ್ಣುವರ್ಧನ್ ವಿಧಿವಶ

ಸಾಹಸ ಸಿಂಹ ವಿಷ್ಣು ವರ್ಧನ್ ವಿಧಿವಶ ರಾಗಿದ್ದಾರೆ. ಮೈಸೂರಿಗೆ ವಿಶ್ರಾಂತಿ ಗಾಗಿ ಹೋದ ಸಂದರ್ಭ ದಲ್ಲಿ ಹೃದಯಾ ಘಾತಕ್ಕೆ ಒಳಗಾಗಿ ದ್ದಾರೆ. ಕನ್ನಡ ಚಿತ್ರರಂಗ ದಲ್ಲಿ ಸಾಕಷ್ಟು ಹೆಸರು ಮಾಡಿರುವ ವಿಷ್ಣುವರ್ಧನ್ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟರಾಗಿದ್ದರು. ಗಾನ ಗಾರುಡಿಗ ಸಿ. ಅಶ್ವತ್ಥ್ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಈಗ ವಿಷ್ಣುವರ್ಧನ್ ಅವರನ್ನೂ ಕಳೆದುಕೊಂಡಿದ್ದೇವೆ. ಭುದವಾರ ಬೆಳಗಿನ ಜಾವ ಎರಡುವರೆ ಹೊತ್ತಿಗೆ ವಿಧಿವಶರಾದರು. ಕಳೆದ ಕೆಲವು ದಿನಗಳಿಂದ ಹೃದಯ ನೋವಿನಿಂದ ಬಳಲುತ್ತಿದ್ದರು.






Wednesday, December 23, 2009

ಗಾಬರಿ ದೇವಿ



ಕಾಡು ಸುತ್ತಿದ ಮಂದಿಗೆ ಈ ಹಕ್ಕಿ ಚಿರಪರಿಚಿತ.
ನಿವೆಸ್ಟೇ ದೈರ್ಯವಂತ ರಾಗಿದ್ದರೂ ಒಮ್ಮೆಯಾದರೂ ನಿಮ್ಮನ್ನು ಗಾಬರಿಗೊಳಿಸದೆ ಇರದು. ಕಾರಣ ಇಸ್ಟೇ, ಗಾಬರಿ ಬೀಳಿಸುವ ಈ ಹಕ್ಕಿ ಕೂಡ ಗಾಬರಿ ಬೀಳುವ ಸ್ವಭಾವದ್ದೆ. ಬಹುತೇಕ ಹಕ್ಕಿಗಳಿಗಿಂತ ಈ ಹಕ್ಕಿಗೆ ಗಾಬರಿ ಬೀಳುವ ಸ್ವಭಾವ ಜಾಸ್ತಿ. ತನ್ನ ಅಕ್ಕಪಕ್ಕ ಬೀಸುವ ಗಾಳಿಗೆ ತರಗಲೆ ಅಲ್ಲಾಡಿದ ಸಪ್ಪಳವಾದರೂ ಕೆಲ ಕ್ಷಣದಲ್ಲೇ ಕಿ.ಮೀ. ದೂರದಲ್ಲಿರುವ ಹಕ್ಕಿ ಇದು.
ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ನೋಡ ಸಿಗುವ ಈ ಹಕ್ಕಿ 'ಬುರ್ಲಿ' ಅರ್ಥಾತ್ Jungle Bush Quail.
ಬುರ್ಲಿಗೆ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ. ಪೊದೆ ಹಕ್ಕಿ, ನೆಲ ಕೆದರೋ ಹಕ್ಕಿ ಎಂದೂ ಕರೆಯುತ್ತಾರೆ. ಬಹಳ ಸೂಕ್ಷ್ಮಜೀವಿಗಳಲ್ಲಿ ಇದೂ ಒಂದು. ಸೂಕ್ಷ್ಮಜೀವಿ ಎನಿಸಿಕೊಂಡಿದ್ದು ಅದರ ಗ್ರಹಣ ಶಕ್ತಿಯಿಂದ. ತಾನಿದ್ದ ಪೊದೆಯ ಸುತ್ತಮುತ್ತ ಸಣ್ಣ ಸದ್ದಾದರೂ ಥಟ್ಟಂತ ಜಾಗೃತ ಸ್ಥಿತಿಗೆ ಬಂದು ಬಿಡುತ್ತದೆ. ಸ್ವಲ್ಪ ಅಪಾಯ ಕಾದಿದೆ ಎಂದು ತಿಳಿದರಂತೂ ಬುರ್ ಎಂದು ಹಾರಿ ಜಾಗ ಖಾಲಿ ಮಾಡಿಬಿಡುತ್ತದೆ. ಬುರ್ಲಿ ಹಕ್ಕಿ ಒಂಟಿಯಾಗಿರುವುದು ವಿರಳ. ಒಂದು ಗುಂಪಿನಲ್ಲಿ ಕನಿಷ್ಠ 3 ರಿಂದ 4 ಹಕ್ಕಿಗಳಾದರೂ ಇರುತ್ತದೆ. ಕಲ್ಲು ಹಕ್ಕಿಗಳಂತೆ ನೆಲದ ಮೇಲೆ ಗೂಡು ಮಾಡಿ ಕೊಳ್ಳುತ್ತದೆ. ಸುತ್ತಲೂ ಹುಲ್ಲುಗಳನ್ನು ತಂದು ಹಾಕಿಕೊಳ್ಳುತ್ತದೆ. ಈ ಹಕ್ಕಿಯ ದೇಹದ ಕೆಳಭಾಗದ ಪಟ್ಟಿಗಳು ಆಕರ್ಷಕ.
ಸಾಮಾನ್ಯವಾಗಿ ಸಂತಾನೋತ್ಪತ್ತಿಯ ವೇಳೆಯಲ್ಲೇ ಗೂಡು ಕಟ್ಟಿಕೊಳ್ಳುವ ಈ ಹಕ್ಕಿ ಆಗಸ್ಟ್-ಮೇ ವೇಳೆಯಲ್ಲಿ 3-5 ಮೊಟ್ಟೆಗಳನ್ನಿಟ್ಟು ಮರಿಮಾಡುತ್ತದೆ. ಈ ವೇಳೆ ವ್ಹೀ ವ್ಹೀ ವ್ಹೀ ಎಂದು ಕೂಗುತ್ತಲೇ ಇರುತ್ತದೆ. ಕಲ್ಲಿನ ಬಣ್ಣವನ್ನೇ ಹೋಲುವ ಈ ಹಕ್ಕಿಯ ದೇಹದ ಮೇಲೆ ಕಂದು ಚುಕ್ಕಿಗಳಿರುತ್ತದೆ. ಬಂಡೆಗಳಿರುವ ಪ್ರದೇಶ, ಕುರುಚಲು ಪ್ರದೇಶ, ಪರ್ಣಪಾತಿ ಕಾಡುಗಳಲ್ಲಿ ಜಾಸ್ತಿ. ಮಣ್ಣಿನಲ್ಲಿರುವ ಬೇಳೆ-ಕಾಳುಗಳು ಮತ್ತು ಕೀಟಗಳೇ ಈ ಹಕ್ಕಿಯ ಆಹಾರ.
ಚಿತ್ರ: ಅಂತರ್ಜಾಲ

Sunday, December 13, 2009

ಸತ್ಯನ್ ಅಸ್ತಂಗತ




ತ್ರಿಕಾ ರಂಗದಲ್ಲಿ ಸಾಕಸ್ಟು ಜನಪ್ರಿಯರಾಗಿರುವ ಟಿ.ಎಸ್. ಸತ್ಯನ್ ಈಗ ನೆನಪು ಮಾತ್ರ. ಭಾನುವಾರ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 86 ವಯಸ್ಸಾಗಿತ್ತು. ಪತ್ರಿಕಾ ರಂಗ ಕಂಡ ವಿಬಿನ್ನ ಫೋಟೋ ಜರ್ನಲಿಸ್ಟ್. ಕಳೆದ ಮೂರ್ನಾಲ್ಕು ದಶಮಾನಗಳ ಹಿಂದೆ ಪತ್ರಿಕಾರಂಗದಲ್ಲಿ ತಮ್ಮ ಅದ್ಭುತ ಛಾಯಾಚಿತ್ರಗಳಿಂದ ವಿಶ್ವದ ಗಮನವನ್ನೇ ಸೆಳೆದವರಲ್ಲಿ ಸತ್ಯನ್ ಕೂಡ ಒಬ್ಬರು. ಮೈಸೂರಿನವರೇ ಆದ ಸತ್ಯನ್ ನಿಜಕ್ಕೂ ಈಗ ನನ್ನ ಕಣ್ಣ ಮುಂದೆ ಬರುತ್ತಿದ್ದಾರೆ.

ಸಾಕಶ್ತು ವರ್ಷಗಳ ಹಿಂದಿನ ಗಟನೆಯಲ್ಲ. ೮ ವರ್ಷಗಳ ಹಿಂದೆ ನಾನು ಮೈಸೂರಿನ ಶ್ರೀ ಕಲಾನಿಕೇತನ ಕಲಾ ಶಾಲೆಯಲ್ಲಿ ಆರ್ಟ್ ಮಾಸ್ಟರ್ ಓದುತ್ತಿದ್ದ ವೇಳೆಯಲ್ಲಿ ಛಾಯಾಚಿತ್ರ ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದೆವು. ಆಗ ಸತ್ಯನ್ ಸೇರಿದಂತೆ ಮೈಸೂರಿನ ಅನೇಕ ಕ್ಯಾತ ಛಾಯಾಚಿತ್ರಕಾರರು ಟಿಪ್ಸ್ ನೀಡಿದ್ದರು. ಅಂದು ಸತ್ಯನ್ ನಮಗೆ ಛಾಯಾಚಿತ್ರದಲ್ಲಿ ಬೆಳಕಿನ ಮಹತ್ವದ ಬಗ್ಗೆ ವಿವರಿಸಿದ್ದರು. ಆ ಬಳಿಕ ಅವರ ಛಾಯಾಚಿತ್ರಗಳನ್ನು ನೋಡಿ ಆನಂದಿಸಿದ್ದೆ. ಅವರ ಛಾಯಾಚಿತ್ರಗಳಲ್ಲಿ ವಿಶೇಷವಾಗಿ ಬೆಳಕು ಮತ್ತು ಯಥಾದೃಷ್ಟರೂಪಣ, ಪರಿದೃಶ್ಯ (perspective) ಗೆ ಮಹತ್ವ ನಿಡುತ್ತಿದುದನ್ನು ಕಾಣಬಹುದು. ಅಸ್ಟೇ ಅಲ್ಲ, ವಿಷಯಾಧಾರಿತ ಚಿತ್ರಗಳನ್ನೂ ಕ್ರಿಯಾಶೀಲವಾಗಿ ಸೆರೆ ಹಿಡಿದಿರುವುದನ್ನು ನೋಡಲು ಸಾಧ್ಯ.

ಟಿ. ಎಸ್. ಸತ್ಯನ್ ಅವರ ‘ಕಾಲಕ್ಕೆ ಕನ್ನಡಿ’ ಪುಸ್ತಕದಲ್ಲಿ ಇಂಥ ಕೆಲವೊಂದು ಮಹತ್ವದ ವಿಚಾರಗಳಿವೆ. ಪತ್ರಿಕೋದ್ಯಮದ ಅಪರೂಪದ ಅನುಭವಗಳನ್ನು ಬರೆದಿದ್ದಾರೆ, ಅನೇಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಪ್ರಿಸಂ ಬುಕ್ಸ್ ಈ ಪುಸ್ತಕ ಪ್ರಕಟಿಸಿದೆ. ಇದು ಕನ್ನಡ, ಇಂಗ್ಲಿಷ್ ಎರಡೂ ಭಾಷೆಯಲ್ಲಿ ಮುದ್ರಣಗೊಂಡಿದೆ. ಸತ್ಯನ್ ಅವರ ಅನೇಕ ಛಾಯಾಚಿತ್ರಗಳು ಇಂಡಿಯಾ ಟುಡೇ, ನ್ಯೂಸ್ ವೀಕ್, ಔಟ್ ಲುಕ್ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಸತ್ಯನ್ ಅವರಿಗೆ ಅಂತಾರಾಷ್ಟ್ರೀಯ ಪ್ರಚಾರ ಗಿಟ್ಟಿಸಿ ಕೊಟ್ಟವರಲ್ಲಿ ಯುನಿಸೆಫ್ ಪಾತ್ರ ಮಹತ್ವದ್ದು. 1979 ರಲ್ಲಿ ನ್ಯೂಯಾರ್ಕ್ ನಲ್ಲಿ ಸತ್ಯನ್ ಅವರ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಿತು. ನಂತರ ಅವರು ಅನೇಕ ರೀತಿಯಿಂದ ಬೆಳೆಯಲೂ ಕಾರಣವಾಯಿತು.

ಟಿ. ಎಸ್. ಸತ್ಯನ್ ಜನಿಸಿದ್ದು 1923 ರಲ್ಲಿ. ಸತ್ಯನ್ ಗೆ ೧೯೭೭ ರಲ್ಲಿ ಪದ್ಮ ಶ್ರೀ ಪ್ರಶಸ್ತಿ ಸಂದಿದೆ.